ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ಪಶ್ಚಿಮ ಬಂಗಾಳಮೂಲದ ರಿಕ್ಷಾ ಚಾಲಕರ ಮೇಲೆ ಹಲ್ಲೆ - ದೂರು ದಾಖಲು

ಹಾಸನ: ಪಶ್ಚಿಮ ಬಂಗಾಳಮೂಲದ ರಿಕ್ಷಾ ಚಾಲಕರ ಮೇಲೆ ಹಲ್ಲೆ - ದೂರು ದಾಖಲು

Fri, 11 Dec 2009 13:20:00  Office Staff   S.O. News Service
ಹಾಸನ, ಡಿ.೧೦- ಪಶ್ಚಿಮ ಬಂಗಾಳ ಮೂಲದ ಹಮಾಲಿಗಳ ಮೇಲೆ  ಆಟೋ ಚಾಲಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬುಧವಾರ ಮಧ್ಯ ರಾತ್ರಿ ನಗರದಲ್ಲಿ ನಡೆದಿದ್ದು, ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ.
 
ಹಾಸನದ ಎ.ಪಿ.ಎಂ.ಸಿ.ಯಲ್ಲಿ ಹಮಾಲಿ ವೃತ್ತಿ ಮಾಡುವ ಪಶ್ಚಿಮ ಬಂಗಾಳ ಮೂಲದ ನಿವಾಸಿಗಳಲ್ಲಿ ಕೆಲವರು ಮಧ್ಯ ರಾತ್ರಿ ಸರಕಾರಿ ಆಸ್ಪv ಬಳಿಯಿಂದ ಎ.ಪಿ.ಎಂ.ಸಿ.ವರೆಗೆ ಆಟೋರಿಕ್ಷಾದಲ್ಲಿ ತೆರಳಿದ್ದಾರೆ.
 
ಈ ಸಂದರ್ಭದಲ್ಲಿ ಬಾಡಿಗೆ ವಿಚಾರಕ್ಕೆ ಆಟೋ ಚಾಲಕ ಮತ್ತು ಹಮಾಲಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವಾಪಸ್ ತೆರಳಿದ ಆಟೋ ಚಾಲಕ ನಂತರ ೧೫ ರಿಂದ ೨೦ ಮಂದಿ ಗುಂಪಿನೊಂದಿಗೆ ಬಂದು  ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಹಮಾಲಿಗಳು ದೂರಿದ್ದಾರೆ.

ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.


ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ ಸರಕಾರಿ ಶಾಲಾ ಮಕ್ಕಳ ಚಿತ್ರಕಲಾ ಪ್ರದರ್ಶನ ಗುರುವಾರ ಆಯೋಜಿಸಲಾಗಿತ್ತು.

ನಗರದ ಆರ್.ಸಿ.ರಸ್ತೆಯಲ್ಲಿನ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ವಿವಿಧ ರೀತಿಯ ಚಿತ್ತಾರಗಳನ್ನು ಬಿಡಿಸಿ ನೋಡುಗರ ಮನಸೂರೆಗೊಂಡರು.
 
ನಗರದ ಪ್ರದೇಶದ ಮಕ್ಕಳು ಮಾತ್ರವಲ್ಲದೇ ಗ್ರಾಮೀಣ ಮಕ್ಕಳಲ್ಲೂ ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ ಎಂದು  ಚಿತ್ರಕಲಾ ಶಿಕ್ಷಕ ದೇಸಾಯಿ ಹೇಳಿದರು.

Share: